Author name: Dr. SIDDAIAH R S

1985ರ ಜೂನ್ 29ರಂದು ಜನಿಸಿದ ಸಿದ್ದಯ್ಯ ಆರ್.ಎಸ್. ಅವರು ‘ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು’ ಎಂಬ ವಿಷಯದಲ್ಲಿ ಡಾಕ್ಟೋರೇಟ್ ಪದವಿಯನ್ನು ಪಡೆದಿದ್ದಾರೆ. ಇವರ ಹುಟ್ಟೂರು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ, ಹೊಳವನಹಳ್ಳಿ ಹೋಬಳಿಯ, ರೆಡ್ಡಿಹಳ್ಳಿ ಗ್ರಾಮವಾಗಿದೆ. ಹವ್ಯಾಸಿ ಪತ್ರಕರ್ತರಾಗಿ ಪತ್ರಿಕಾ ರಂಗದಲ್ಲಿ ವಿಶೇಷ ವರದಿಗಾರರಾಗಿ, ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಯುಜಿಸಿ-ಜೆಆರ್‌ಆಫ್ ಸರ್ಟಿಫಿಕೇಟ್‌ಅನ್ನು ಐದು ಬಾರಿ, ಯುಜಿಸಿ-ನೆಟ್ ಸರ್ಟಿಫಿಕೇಟ್‌ಅನ್ನು ಎಂಟು ಬಾರಿ ಪಡೆದುಕೊಂಡಿದ್ದಾರೆ. ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಇವರು ಹಲವು ವಿದ್ವತ್‌ಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಲೇಖನಗಳನ್ನು ಮಂಡನೆ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಜೂನಿಯರ್ ರೀಸರ್ಚ್ ಫೆಲೋಶಿಪ್’ಅನ್ನು ಪಡೆದುಕೊಂಡು, ಪಿಎಚ್.ಡಿ.ಯನ್ನು ಪೂರ್ಣಗೊಳಿಸಿದ್ದಾರೆ. ಪ್ರಚಲಿತ ಘಟನೆಗಳಿಗೆ ಸ್ಪಂದಿಸಿ, ಪತ್ರಿಕೆಗಳಿಗೆ ಹಲವಾರು ಅಂಕಣ ಬರಹಗಳನ್ನು ಬರೆದಿದ್ದಾರೆ. ಕನ್ನಡ ಅಧ್ಯಯನ ವಿಷಯದಲ್ಲಿ ಉತ್ತಮ ಆಸ್ತೆಯನ್ನು ಇಟ್ಟುಕೊಂಡಿರುವ ಇವರು ಸಂಶೋಧಕರಾಗಿ, ಕವಿಯಾಗಿ, ವಿಮರ್ಶಕರಾಗಿ, ಹವ್ಯಾಸಿ ಪತ್ರಕರ್ತರಾಗಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಪ್ರಸ್ತುತ ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. Dr. SIDDAIAH R.S. is a researcher, lecturer, and amateur journalist. Several socially oriented articles and research papers responding to current events have been published in various newspapers, magazines and websites in the country. His research work titled ‘Different Bases of Kuvempu Poetry’ has been published. Writer, Poet, Critic, Lecturer, Journalist, Culture Thinker and Researcher.

courses 7
Business

Working

Lorem Ipsum is simply dummy text of the printing and typesetting industry. Lorem Ipsum has been the industry’s standard dummy

Scroll to Top